ಶನಿವಾರ, ಏಪ್ರಿಲ್ 25, 2015
ಹೋಳಿ
ವರ್ಕ್ ಶಾಪ್ ಮುಂದೆ ಇರುವ
ಶ್ರೀಮಂತರ ಮಕ್ಕಳೆಲ್ಲರೂ
ತರಹೇವಾರಿ ಬಣ್ಣಗಳ ಮೆತ್ತಿಕೊಂಡು
ಹೋಳಿ ಆಚರಣೆಯಲ್ಲಿ ಸಂಭ್ರಮದಿಂದ
ತೊಡಗಿದ್ದರು ಅದನ್ನೇ ನೋಡುತ್ತಿದ್ದ ರಾಜು
ಕಣ್ಣಲ್ಲಿ ಉತ್ಸಾಹ ಮಿಂಚು ಮೂಡಿತ್ತು
ಇವರುಗಳಿಗೆ ಜುಜುಬಿ ವರುಷಕ್ಕೊಮ್ಮೆ
ಮಾತ್ರ ಬಣ್ಣದ ಹಬ್ಬ.
ಆದರೆ ನನಗೆ ಪ್ರತೀದಿನವೂ...!
ಲೋಕಭಿರಾಮವಾಗಿ ಮನದೊಂದಿಗೆ
ಮಾತಿನಲ್ಲಿರುವಾಗಲೇ ಯಜಮಾನನ
ಕೂಗಿದ ಸದ್ದಿಗೆ ವಾಸ್ತವಕ್ಕಿಳಿದ.
ಆಗ ಅವನ ಕೈಯಲ್ಲಿದ್ದ ಗ್ರೀಸ್ ಮೈಮೇಲೆ
ಚೆಲ್ಲಿಕೊಂಡು ಅರಿವೆ ಬಣ್ಣ ಹೋಳಿಯಾಯಿತು.
ಎ.ಜೆ ಪರಪ್ಪು
ಅಲ್ಪಸಂಖ್ಯಾತರು ನಾವು ಅಲ್ಪಬುದ್ದಿಯವರಲ್ಲ
ನನ್ನ ಭವ್ಯ ಭಾರತದ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ
ಮುಂದೆ ಹಾದು ಹೋಗುತ್ತದೆ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ
ಮುಂದೆ ಹಾದು ಹೋಗುತ್ತದೆ
ಮಸೀದಿ ಇಗರ್ಜಿ ಉಸ್ತಾದ್
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಘರ್ ವಾಪಸಿ ಯತ್ನ
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ವಿವಿಧತೆಯಲ್ಲಿ ಏಕತೆಯ ದೇಶವನ್ನು
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಅಲ್ಪ ಸಂಖ್ಯಾತರನ್ನು ಅವಮಾನಿಸಿ
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..
ಎ.ಜೆ ಪರಪ್ಪು
ಜಾತಿ ಗಣತಿ ಫಲ ಸೊನ್ನೆಯಾಗದಿರಲಿ
ಸಾಮಾಜಿಕ ನ್ಯಾಯಕ್ಕೆ ಹೆಸರಾದ ಕರ್ನಾಟಕದಲ್ಲಿ ಸರ್ವ ಸಮುದಾಯದ
ಏಳಿಗೆಗಾಗಿ ಮಾನ್ಯ ಮುಖ್ಯಮಂತ್ರಿವರು ಹಲವಾರು ಯೋಜನೆಗಳನ್ನು ರೊಪಿಸಿ ಅದನ್ನು
ಜಾರಿಗೆ ತಂದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾದರು ...
ಜಾತಿರಹಿತ ಸಮಾಜ ನಿರ್ಮಾಣವಾಗಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯವು
ಅಂದಮೇಲೆ "ಅಟ್ಟಿಸದ ಕಡೆ ಹೋಗದಿದ್ದರೆ ಹೋದ ಕಡೆ ಅಟ್ಟಿಸು" ನಮ್ಮೊರ ಗಾದೆ ಮಾತಿನಂತೆ
ಜಾತಿಯಲ್ಲಿ ಪ್ರಬಲರ ಪಡೆಯವ ಅದೇ ಪ್ರಾತಿನಿಧ್ಯವನ್ನು ಸಮಾಜದಲ್ಲಿ ಅತ್ಯಂತ ತುಳಿತಕ್ಕೊಳಗಾದ
ನೊಂದ ಹಾಗೊ ಸೊಕ್ತ ಸ್ಥಾನ ಮಾನವಿಲ್ಲದೆ ಸಮಾಜದಲ್ಲಿ ಹಿಂದುಳಿದವರಾಗೆ ಬದುಕುವ ಕೆಳಜಾತಿ,
ಉಪಜಾತಿವರ ಆರ್ಥಿಕ ಹಾಗೊ ಶ್ಯೆಕ್ಸಣಿಕ ಸ್ಥಿತಿಯನ್ನು ಸುಧಾರಣೆ ಮಾಡಿದಾಗ ಅಲ್ಲಿ ಜಾತಿಗಳ ನಡೆವೆ
ಕಂದರ ಕಡಿಮೆಯಾಗಿ ಜಾತಿ ವ್ಯವಸ್ಥೆ ಇಲ್ಲದಾಗುವ ಪ್ರಸಂಗ ಬರಬಹುದು..ಅದ್ದರಿಂದ ಜಾತಿ ಸಮೀಕ್ಷೆ
ಕಾಲದ ಅವಶ್ಯ ಕೊಡ ...ಆ ನಿಟ್ಟಿನಲ್ಲಿ ಮಾನ್ಯ ಸಿದ್ದರಾಮ್ಯಯ ಸರಕಾರ 175 ಕೋಟಿ ಖರ್ಚ ಮಾಡಿ
ತರುವ ಜಾತಿ ಗಣತಿ ಫಲ ಸೊನ್ನೆಯಾಗದಿರಲಿ
ಜಬ್ಬಾರ್ ಪರಪ್ಪು,
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)





