ಅಲ್ಪಸಂಖ್ಯಾತರು ನಾವು ಅಲ್ಪಬುದ್ದಿಯವರಲ್ಲ
ನನ್ನ ಭವ್ಯ ಭಾರತದ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ
ಮುಂದೆ ಹಾದು ಹೋಗುತ್ತದೆ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ
ಮುಂದೆ ಹಾದು ಹೋಗುತ್ತದೆ
ಮಸೀದಿ ಇಗರ್ಜಿ ಉಸ್ತಾದ್
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಘರ್ ವಾಪಸಿ ಯತ್ನ
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ವಿವಿಧತೆಯಲ್ಲಿ ಏಕತೆಯ ದೇಶವನ್ನು
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಅಲ್ಪ ಸಂಖ್ಯಾತರನ್ನು ಅವಮಾನಿಸಿ
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..
ಎ.ಜೆ ಪರಪ್ಪು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ