ಶನಿವಾರ, ಏಪ್ರಿಲ್ 25, 2015

ಅಲ್ಪಸಂಖ್ಯಾತರು ನಾವು ಅಲ್ಪಬುದ್ದಿಯವರಲ್ಲ 


ನನ್ನ ಭವ್ಯ ಭಾರತದ
ಮನೆ ಮನೆಗಲ್ಲಿ ಭಗವಾದ್ವಜ
ಕಟ್ಟ ಬೇಕೆನ್ನುವ ಸುದ್ದಿ ಬಂದಾಗಲೆಲ್ಲ
ನೆರೆಯ ಪಾಪಿಸ್ಥಾನದ
ಹಸಿರು ದ್ವಜದ ದುರ್ಗತಿ ಕಣ್ಣ 
ಮುಂದೆ ಹಾದು ಹೋಗುತ್ತದೆ
ಮಸೀದಿ ಇಗರ್ಜಿ ಉಸ್ತಾದ್
ಭಗಿನಿಯರ ಮೇಲೆ
ದಾಳಿ ನಡೆಸಿ ಹಲ್ಲೆಗೊಂಡ
ವಾರ್ತೆ ಕೇಳಿದಾಗಲೆಲ್ಲ
ದೇಶವನ್ನು ಕಟುಕರ ಕೈಗೆ ಕೊಟ್ಟು
ನಮ್ಮ ಸಾವಿನ ಖೆಡ್ಡವನ್ನು ತಾವೇ
ತೋಡಿಕೊಂಡ ವಿಷಾಧ ಆವರಿಸುತ್ತೆ
ಘರ್ ವಾಪಸಿ ಯತ್ನ
ಮೀಸಲಾತಿ ಕಡಿವಾಣಕ್ಕೆ ಪ್ರಯತ್ನ
ಆಹಾರ ಪದ್ದತಿಯ ನಿಯಂತ್ರಣ
ಇದು ಕೋಮುವಾದದ ನೇರ ಆಮಂತ್ರಣ!
ವಿವಿಧತೆಯಲ್ಲಿ ಏಕತೆಯ ದೇಶವನ್ನು
ಒಡೆದು ಕಪಟ ಪ್ರೇಮದ ಕೋಮು ಧ್ವೇಷದ
ದೇಶ ಕಟ್ಟಲು ಇದು ಸಕಾಲ
ಕೋಮು ವಿಷ ಬೀಜ ಬಿತ್ತಲು
ಇದು ಪರ್ವಕಾಲ!
ಅಲ್ಪ ಸಂಖ್ಯಾತರನ್ನು ಅವಮಾನಿಸಿ
ಹಿಯಾಳಿಸಿ ಅನುಮಾನಿಸಿ
ಅವರ ಹಕ್ಕುಗಳ ಕಸಿದು ಬಸಿದು
ಅವರ ಗೋರಿಯ ಮೇಲೆ ದೇಶ ಕಟ್ಟಲು ಹೊರಟವರೇ..
ಮದ್ಯ ಕುಡಿದ ಚೇಳು
ತನ್ನ ತಾನು ಕುಟುಕಿ ಸಾಯುವ ಸ್ಥಿತಿ
ಧರ್ಮದ ಅಮಲೇರಿದ ನಿಮಗೂ ಬರಲಿದೆ ಕಾದು ನೋಡಿ..

ಎ.ಜೆ ಪರಪ್ಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ