ಗುರುವಾರ, ಜನವರಿ 23, 2014

ವರದಕ್ಷಿಣೆ ಮೋಹಿ ಸಮಾಜ ದ್ರೋಹಿ

ಅದು ಯಾವನಯ್ಯಾ ಜಾರಿಗೆ ತಂದ
ವರದಕ್ಷಿಣೆಯೆಂಬ ನೂತನ ಹೆಸರಿನ ಬಿಕ್ಷಾಟನೆ
 
ನನ್ನದೇ ತರಗತಿಯಲ್ಲಿ ಓದಿದ ಅವಳಿಗೆ ಇವತ್ತು
ಮದುವೆ ಅಂತ ನಾನು ಮೂಲೆಯಲಿ ಕೂತು
ಕಣ್ಣಿರು ಹಾಕುತ್ತಿದುದನು ನೋಡಿ ಅಪ್ಪ ಹೊರಟರು
ನನಗೆ ಗಂಡು ಹುಡುಕಲು… 
ಗಂಡು ಸಿಕ್ಕಿದ, ಕುಂಟನು-ಕುರುಡನು
ನಾ ಕೇಳಲಿಲ್ಲ..ಒಂದು ವಯಸ್ಸು ಅದು
ದಾಟಿದರೆ ಬರುವುದು ಎರಡನೆ ಸಂಬಂಧ
ಅಂತ ಯಾವುದೋ ಪುಣ್ಯಾತ್ಮ ಹೇಳಿದ್ದಾನೆ…
ಅದಕ್ಕೆ ಕಣ್ಣು ಮುಚ್ಚಿ ಸಮ್ಮತಿಸಿದೆ
ಪಾಲಿಗೆ ಬಂದದ್ದು ಪಂಚಾಮ್ರತವೆಂದು…
ಅದರೆ ಅವನು ಕೇಳಿದ ವರದಕ್ಷಿಣೆಯೆಂಬ ಭಿಕ್ಷೆ
ಪಾಪ ಅಪ್ಪ ಸಾಲ-ಶೊಲ ಮಾಡಿ ಕೊಟ್ಟ ಹಣದಿಂದ
ಮನೆಗೆ ಬಳಿದಿರುವ ಪೈಂಟ್ ನನ್ನ ಅಪ್ಪನ ಬೆವರಿನ
ವಾಸನೆ ಮೂಗಿಗೆ ಬಡಿಯತಿದೆ
ಮೌಲಾಂಜಿ ರಾತ್ರಿ ಕೈಗೆ ಇಟ್ಟ ಆ ಗೋರಂಟಿ ಬಣ್ಣ
ಅಪ್ಪ ಸಾಲ ತಿರಿಸಲಾಗಾದೆ ಜೈಲು ಸೇರಿ ಅವರು
ಕೊಟ್ಟ ಬೆತ್ತದ ಪೆಟ್ಟಿನಿಂದ ಬೆನ್ನಲ್ಲಿ ಮೊಡಿದ
ಬಾಸುಂಡೆ ಬಣ್ಣದಂತೆ ಕಾಣುತಿದೆ… 
ನಾನು ಸಂಕಟ ಪಡಬಾರದೆಂದು ಒಡಲಲ್ಲಿ
ನೋವಿನ ಸಾಗರವನ್ನು ಇಟ್ಟು ನಗು ಮುಖದಲ್ಲಿ ಇದ್ದಿಯಲ್ಲ ..
ಹೇಳು ಇದು ಯಾವ ಕಲಾಕ್ಷೇತ್ರದಲ್ಲಿ ಕಲಿಸಿಕೊಟ್ಟರಪ್ಪ..?? 
ನಾನು ಬಡವಳಾಗಿ ಹುಟ್ಟಿದ್ದು ತಪ್ಪಾ…??
ಅದೂ ಹೆಣ್ಣಾಗಿ ಹುಟ್ಟಿದು ತಪ್ಪಾ..??
ಹೇಳಿ ಮೀಸೆ ಹೊತ್ತು ತಿರುಗುವ ಗಂಡು ಜಾತಿಗಳೇ 
 
ಯಾರದ್ರೂ ಪುಣ್ಯಾತ್ಮರು ಸಹಾಯ
ಮಾಡಿಯಾರು ಅಂತ ಹೊರಟೆ…
ನೀ ಮಸೀದಿಯೆಂಬ ಅಲ್ಲಾಹನ ಭವನಕ್ಕೆ
ಅವರು ಕೊಟ್ಟರು “ಲೆಟರ್ ಪ್ಯಾಡ್ “ಎಂಬ ಭಿಕ್ಷಾ ತಟ್ಟೆ…
ನನ್ನದೊಂದು ದೊಡ್ಡ ಧಿಕ್ಕಾರವಿರಲಿ,
ನೆತ್ತಿಯಲ್ಲಿ ಕಪ್ಪು ಬುಗುಟಿ ಹೊತ್ತು
ಸ್ವಯಂಘೋಷಿತ ಸಮಾಜ ಉದ್ಧಾರಕರಿಗೆ 
ತನ್ನ ಜೀವ ತೆತ್ತಾದರೂ ಮಗಳು ಚೆನ್ನಾಗಿ
ಬಾಳು ಕಂಡ್ರೆ ಸಾಕು ಅನ್ನುವ ನಿನ್ನ ಮನಸು,
ತಾನು ಕರಗಿದರೂ, ಜಗಕ್ಕೆಲ್ಲಾ ಬೆಳಕು ಕೊಡುವ ಮೇಣದಂತೆ…
ಅಪ್ಪ ನೀನು ಎಂಥ ತ್ಯಾಗಮಯಿ….
 
ಅಬ್ದುಲ್ ಜಬ್ಬಾರ್ ಪರಪ್ಪು ಇರಾ.