ಭಾನುವಾರ, ಜುಲೈ 28, 2013

ಅತ್ಯಾಚಾರ ಪ್ರಕರಣಗಳಿಗೆ ಯಾರು ಹೊಣೆ ?..




ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಭಾರತದಾದ್ಯಂತ ಪ್ರತಿಭಟನೆ ನಡೆದು ಆಡಳಿತ ಸರಕಾರಕ್ಕೆ ಸಂಚಕಾರ ತಂದಿಟ್ಟಿತು. ಆ ಘಟನೆ ನಮಗೆ ಮರೆತೇ ಹೊಯಿತು ಅದು ಅಲ್ಲದೆ ನಮ್ಮ ಕರಾವಳಿ ತಡಿಯಲ್ಲಿ ನಡೆದ ಸೌಮ್ಯ ಅತ್ಯಾಚಾರ ಪ್ರಕರಣ ಕೆಲವು ಪಟ್ಟಭದ್ರ ಹಿತಾಶಕ್ತಿಗಳ ನಡುವೆ ಮಣ್ಣು ಸೇರಿತು. ಹಾಗೆಯೇ  ಹಳ್ಳಿ ಪ್ರದೇಶದಲ್ಲಿ ನಡೆದು ಜಗಜ್ಜಾಹಿರವಾಗದೆ ಮುಚ್ಚಿ ಹೋದ ಹಲವು ಅತ್ಯಾಚಾರ ಪ್ರಕರಣವಾಗಲಿ ಅಥವಾ ಮೊನ್ನೆ ನಡೆದ ಮಣಿಪಾಲ ಗ್ಯಾಂಗ್ ರೇಪ್ ಕೂಡ ಈ ರೀತಿ ಹಳ್ಳ ಹಿಡಿಯುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲ ಆಗಿ ಆರೋಪಿಗಳ್ಳನ್ನು ಗಲ್ಲು ಶಿಕ್ಷೆ ಕೊಡಿಸಿದರೂ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅದು ತಪ್ಪಲ್ಲ ಯಾಕೆ ಅಂತ ಕೇಳ್ತೀರ..? ನಮ್ಮ ಈ ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳು ನಡೆಯುದಕ್ಕೆ ಯಾವ ಪೋಲಿಸ್ ಅಧಿಕಾರಿಯನ್ನಾಗಲೀ ನಮ್ಮ ಉಸ್ತುವಾರಿ ಸಚಿವರನ್ನಾಗಲೀ ನಿಂದಿಸಿ, ದೂಷಿಸಿ ಫಲವಿಲ್ಲ. ಇದಕ್ಕೆ ನೇರ ನೈತಿಕತೆ ಹೊಣೆ  ಈಗಿನ ಕಾಲದ ನಾರಿಗಳೆ ಹೊರಬೇಕು. ಇವರ ಅರೆ-ಬರೆ ಬಟ್ಟೆಗಳು ನಿಮ್ಮನ್ನು ಈ ಸ್ಥಿತಿ ತಂದಿಟ್ಟಿದೆ ಎಂದು ಯಾರಾದರು ಕಹಿ ಸತ್ಯವನ್ನು ಒಪ್ಪಲು ತಯಾರಿದ್ದಾರ..? ಇಂತಹ ರೇಪ್ ನಡೆದಾಗ ಟೀವಿ ಮಾದ್ಯಮಗಳಲ್ಲಿ ಗಂಟೆ ಗಟ್ಟಲೆ ಒಣ ಚರ್ಚೆ ಗಳು ನಡೆಯುತ್ತಲೇ ಇರುತ್ತದೆ. ಯಾವ ಮಹಿಳಾ ಹಕ್ಕುಗಳ ದೊಣ್ಣೆ ನಾಯಕಿಯರು ಈ ಸತ್ಯವನ್ನು ಒಪ್ಪಲು ತಯಾರಿಲ್ಲ. ಇಲ್ಲಿ ಇಂತಹ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಇಂದಿಗೂ ಯಾವ ಮಾದ್ಯಮಗಳಲ್ಲು ನಡೆದಿಲ್ಲ, ನಡೆಯುವುದಿಲ್ಲ.
ಗೆಳಯರೇ, ನಾನು ನೇರ ವಿಷಯಕ್ಕೆ ಬರುತ್ತೇನೆ. ಮೊನ್ನೆ ನಡೆದ ಮಣಿಪಾಲ್ ಗ್ಯಾಂಗ್ ರೇಪ್ ಬಗ್ಗೆ ನಾನು ಮತ್ತು ನನ್ನ ಆಪೀಸ್‍ನ ವಾಚ್‍ಮೆನ್ ಜೊತೆ ಚರ್ಚೆ ಮಾಡುವಾಗ ಅವರು ಹೇಳಿದ ಮಾತು ಈ ಲೇಖನ ಬರೆಯಲು ನನಗೆ ಸ್ಫೂರ್ತಿ ನೀಡಿತು. ಅವರು ಹೇಳುತ್ತಾರೆ, “ಈಗಿನ ಕಾಲದ ಅರೆ-ಬರೆ ಬಟ್ಟೆ ನೋಡಿದರೆ ಪರಬೆಗ್ ಯಂಕ್ ಮರ್ಲ್ ಪತ್ತುಂಡು (ಅಜ್ಜನಾದ ನನಗೇ ಹುಚ್ಚು ಹಿಡಿಸುತ್ತೆ) ಮತ್ತೆ ನಿಮ್ಮಂತ ನಿಗಿ ನಿಗಿ ವಯಸ್ಸಿನ ಹುಡುಗರು ಏನು ಮಾಡಿಯಾರು..?” ಅವರು ಇನ್ನೊಂದು ವಿಷಯ ಹೇಳುತ್ತಾರೆ.. “ನಿಮ್ಮ ಧರ್ಮದಲ್ಲಿನ ಪರ್ದಾ ಪದ್ದತಿ ಒಂದು ಲೆಕ್ಕದಲ್ಲಿ ಸರಿ ಅನಿಸುತ್ತೆ ನಿಮ್ಮ ಮುಸ್ಲಿಮ್ ಹುಡುಗಿಯರು ಈ ಕಾಮುಕರ ಕಣ್ಣಿನಿಂದ ಸೇಪ್ ಆಗಿರುತ್ತಾರೆ” ಅನ್ನುತ್ತಾನೆ.

ಪ್ರೀತಿಯ ಗೆಳೆಯರೇ, ಮೇಲೆ ಇರುವ ಚಿತ್ರವನ್ನು ಒಮ್ಮೆ ನೋಡಿ.. ಇದು ರಸ್ತೆ ಬದಿಯಲ್ಲಿ ನೆಡುವ ಸಾರ್ವಜನಿಕ ಸಸಿ ಅದಕ್ಕೆ ಸುತ್ತಲು ಬೇಲಿ ಹಾಕಿದ್ದಾರೆ ಪಂಜರದ ಹಾಗೆ ಯಾಕೆಂದರೆ ಆ ಗಿಡಗಳು ದನ-ಕರುಗಳ ಹೊಟ್ಟೆ ಸೇರದಿರಲಿ ಅಂತ ರಕ್ಷಣೆಗಾಗಿ ಈ ಬೇಲಿಯನ್ನು ಹಾಕುವ ಉದ್ದೇಶ ಹೊರತು ಬೇರೇನು ಅಲ್ಲ, ಅದರ ಹಾಗೇ ಈ ಪಂಜರದಂತಿರುವ ಬೇಲಿಯನ್ನು ಯಾರು ಕೂಡ ಬಂಧನ ಅಂತ ಕರೆಯಲು ಸಾದ್ಯವೇ..? ಹಾಗೆಯೇ ಇಸ್ಲಾಂ ಕಲಿಸಿದಂತಹ ಪರ್ದಾ ಪದ್ದತಿ ಕೂಡ ತಥೈವ.. ಕಾಮುಕರ ಕಣ್ಣಿನಿಂದ ರಕ್ಷಣೆಗಾಗಿ ಹೊರತು ಇದು ಬಂಧನವಲ್ಲ ಅಂತ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆಲವು ಗಂಡುಬೀರಿ ನಾರಿಗಳಿಗೆ ಅರ್ಥವಾಗುವುದು ಯಾವಾಗ..? 


ಇದನ್ನು ವಿ ಕೆ ನ್ಯೂಸ್ ನಲ್ಲಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ http://www.vknewz.com/2013/07/article-about-gang-rape/