ಬುಧವಾರ, ಫೆಬ್ರವರಿ 17, 2016

 ನಬಿ ಜನ್ಮ ದಿನಾಚರಣೆ
~~~~~~~~~~~

ಜಬ್ಬಾರ್ ಪರಪ್ಪು,ಇರಾ

ನಬಿ ಜನ್ಮ ದಿನಾಚರಣೆ ಅಚರಿಸಬೇಕೋ
ಬೇಡವೂ ತರ್ಕವನ್ನು ಸಲ್ಪ ಪಕ್ಕಗಿಡಿ..!!
ನನಗೊಂದಿಷ್ಟು ಕೆಲಸವಿದೆ
ತುರ್ತಾಗಿ ನೆಬಿ ಕೀರ್ತನೆ ಬರೆಯಬೇಕಿದೆ;
ಆಧುನಿಕತೆಯ ಸುಳಿಯಲ್ಲಿ ಸಿಕ್ಕಿ
ನಾಸ್ತಿಕನಾಗಿಯೋ ನೂತನಾವಾದಿಯಾಗಿಯೋ
ಅಂಕೆ ಬದಲಿಸುವ
ಅವಕಾಶಗಳು ಹೇರಳವಿರುವ
ಸಮುದಾಯಲ್ಲಿ ನನ್ನ ಮಕ್ಕಳಿಗೆ
ಕಂಠಪಾಠ ಮಾಡಿಸಿ
ಹಾಡಿಸಿಬೇಕಿದೆ:
ಅದಾದಾಗಲಿದೆ ಅವರನ್ನು
ಮಾನವನ್ನಾಗಿಸಲು ನಾ ಮಾಡುವ
ಉದಾತ್ತ ಕಾರ್ಯ..!!

ನಬಿ ಜನ್ಮದಿನಾಚರಣೆ ಅಚರಿಸಬೇಕೋ
ಬೇಡವೋ ತರ್ಕವನ್ನು ಸಲ್ಪ ಪಕ್ಕಗಿಡಿ..!!
ಹಬ್ಬದ ದಿನದಂದು ಕಣ್ಣೀರಿಟ್ಟ
ಹುಡುಗನ ತಲೆ ನೇವರಿಸಿ
ಅವನಿಗೆ ಹೊಸ ಬಟ್ಟೆ ಕೊಡಿಸಿ
ಅವನಾಸೆಯಂತೆ
ಹೆಗಲ ಮೇಲೆ ಕೂರಿಸಿ ನಡೆದ
ಅನಾಥರ ಪ್ರವಾದಿಯನ್ನು ಅಚ್ಚುಕಟ್ಟಾಗಿ
ಹಿಂಬಾಲಿಸುವ ಗುರುವರ್ಯರುಗಳ ಕಣ್ಣಲ್ಲಿ
ನೆಬಿ ಅಸ್ಮಿತೆ ಕಾಣಬೇಕಿದೆ!!
ನನಗೀಗ ಶೀಘ್ರ
ಯತೀಂಖಾನಾಕ್ಕೆ ತೆರಳಬೇಕಿದೆ..!!

ನೆಬಿ ಜನ್ಮದಿನಾಚರಣೆ ಅಚರಿಸಬೇಕೋ
ಬೇಡವೂ ತರ್ಕವನ್ನು ಸಲ್ಪ ಪಕ್ಕಗಿಡಿ..!!
ಇನಿಮ್ಮ ತರ್ಕದಿಂದ ಬುದ್ದ ಬಸವಣ್ಣನರ
ತತ್ವಕ್ಕಿಂತ ಪ್ರವಾದಿ ವಚನ ಜಗತ್ತಿನ
ಉದ್ದಗಲಕ್ಕೂ ಪ್ರಚಾರಗೊಂಡು
ಮಾನವೀಯತೆ ಮೇಲ್ಮೈಸಿದ ಜನರ
ಗುಂಪೊಂದನ್ನು
ಕಳೆದುಕೊಂಡ ವಿಷಾದವಿದೆ!
ತುರ್ತಾಗಿ ಪ್ರವಾದಿ ಸಂದೇಶ
ಜಗದಗಲ ಸಾರಿ ಮಾನವನಲ್ಲಿ
ಮಾನವೀಯತೆ ಜಾಗೃತಗೊಳಿಸಿಬೇಕಿದೆ!!

ನೆಬಿ ಜನ್ಮದಿನಾಚರಣೆ
ಬೇಕೋ ಬೇಡವೂ ?
ಗದ್ದಲವನ್ನು ಸ್ವಲ್ಪ ನಿಲ್ಲಿಸಿ!
ಅಲ್ಲೆಲ್ಲೋ ಪ್ರೇಮಿಗಳು
ಮನದಾಳದಿಂದ ಮನಮುಟ್ಟುವಂತೆ
ಬುರ್ದಾ ಆಲಾಪಿಸುತ್ತಿದ್ದಾರೆ;
ನನಗೊಂದಿಷ್ಟು ಏಕಾಂತ ನೀಡಿ
ಆ ಇಶಲ್ ಗೆ ಸಲ್ಪ ಕಿವಿಯಾಗಿ
ಆಶಿಕಿಗಳಾ ಸಾಲಿಗೆ ಸೇರಬೇಕಿದೆ..!!

ನೆಬಿ ಜನ್ಮದಿನಾಚರಣೆ ಅಚರಿಸಬೇಕೋ ಬೇಡವೋ? 

ತರ್ಕವನ್ನು ಮುಂದುವರಿಸೋಣ...
ನೆಬಿ ಮದ್ಹ್ ಮಾಡಿ, ಮೌಲೂದ್ ಸ್ವಲಾತ್ ಓದಿ ಪ್ರಾರ್ಥಿಸಿದ

 ತಬ್ರುರುಕ್ ಬಾಯಿಗೇರಿಸಿಕೊಂಡು ಶುರುಹಚ್ಚಿಕೊಳ್ಳೋಣ
ಹಾಗದರೂ ನಿಮ್ಮ ರಕ್ತದಲ್ಲಿ ಆ ಸೀರಣಿ ಆಕ್ಸಿಜನಗಾಗಿ 

ಪರಿವರ್ತನೆಗೊಂಡು ಸಾಸಿವೆಯೆಷ್ಟದರೂ
 ಪ್ರವಾದಿ ಪ್ರೇಮ ಹೃದಯಕ್ಕೆ ಹರಿದು
ಎಲ್ಲರ ಹೃದಯ ಪ್ರವಾದಿ ಪ್ರೇಮದತ್ತ ತೆರೆಯಲಿ;
ಜಗತ್ತೇ ಪ್ರವಾದಿ
ದಿನಾಚರಣೆ ಕೊಂಡಾಡಲಿ!!!


http://medianine.in/news-details.php?id=703&tbl=topnews#sthash.oHAUTHtE.dpbs

ಕೃಷ್ಣ ಮೂರ್ತಿ ಸರ್ ಜೊತೆ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಹನಿಗವನ


ಅಪ್ಪ ಅಂದ್ರೆ ಅಕಾಶ ಮಣಿಕಾಂತ್ ಸರ್ ಜೊತೆ

ಕವಿತೆಗೆ ಸಿಕ್ಕ ಬಹುಮಾನ


ಬಹುಮಾನ

ಕವಿತೆಗೆ  ಸಿಕ್ಕ ಬಹುಮಾನ

ಸಾಹಿತ್ಯ ಗೆಳೆಯರೊಂದಿಗೆ

ಗಣೇಶಣ್ಣ ಜೊತೆ
ಯಂಶ ,ಹುಸೇನಿ ಜೊತೆ

ಚೊಚ್ಚಲ ಕವಿಗೋಷ್ಠಿಯಲ್ಲಿ

ಕಿರು ಕಾಣಿಕೆ ಚೇತನ ತೀರ್ಥಹಳ್ಳಿವರಿಂದ
ಚೊಚ್ಚಲ ಕವಿಗೋಷ್ಠಿಯಲ್ಲಿ

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಸಣ್ಣ ಕಥೆ


ಸಾಹಿತ್ಯ ಗೆಳೆಯರೊಂದಿಗೆ



ಸಾಹಿತ್ಯ ಗೆಳೆಯರೊಂದಿಗೆ



ಶನಿವಾರ, ಏಪ್ರಿಲ್ 25, 2015

ಆ ಮಾಯಾ ನಗರಿಯ ಬಿರು ಬೇಸಿಗೆ
ಮಟ ಮಟ ಮಧ್ಯಾನ
ನೆತ್ತಿಯ ಮೇಲೆ ಸೂರ್ಯ
ಕುಲುಮೆಯಲಿ ಕಾದ
ಸಲಾಕೆಯ೦ತೆ ಬಿಸಿಯಾದ 
ಟಾರು ರಸ್ತೆ!
ಬರಿಗಾಲಿಟ್ಟರೆ ಸಾಕು
ಬೊಬ್ಬೆ ಎದ್ದು ಬಿಡುತ್ತದೆ
ಉಳ್ಳವರು ದುಬಾರಿ
ಬೆಲೆಯ ಶೂ ಧರಿಸಿ
ನಡೆಯುತ್ತಾರೆ
ಅಲ್ಲೊಬ್ಬಳು ಅಬ್ಬೇಪಾರಿ
ಬೊಜ್ಜು ಬಾಯಿಯ ಅಜ್ಜಿ
ಅದೇ ರೋಡಿನಲ್ಲಿ
ಬರಿಗಾಲಲ್ಲಿ ನಡೆಯುತ್ತಿದ್ದಾಳೆ
ಒಮ್ಮೆ ತುದಿಗಾಲ್ಲಿ
ಮತ್ತೊಮ್ಮೆ ಕಡೆ ಕಾಲಲ್ಲಿ...
ಇದನ್ನು ನೋಡಿಯೂ
ನೋಡದ ಹಾಗೆ ಹೋಗುವ
ಜನರನ್ನು ನೋಡಿ
ಮರುಕಪಟ್ಟ ಕಾಗೆಯ
ರೋಧನೆ
"ಓ ರಸ್ತೆಯೇ ಆ ಅಜ್ಜಿ ನಡೆದಷ್ಟು
ದೂರ ನಿನ್ನ ಮೈ ತಣ್ಣಗಾಗಿಸಿ ಕೊಡು"

ಎ .ಜೆ ಪರಪ್ಪು

ಅಮ್ಮಾ











ಅಮ್ಮಾನಿನ್ನ ಮಮತೆಯ ಸಾಗರದ
ಸಾರವನ್ನು ಜಗತ್ತಿಗೆ ಸಾರಬೇಕಿಂದು
ಅಮ್ಮಾ
ಅಮ್ಮನಿಲ್ಲದ ಜಗತ್ತು
ಬರೀ ಸೊನ್ನೆಯೆಂದು

ನನ್ನ ಹುಟ್ಟು ನಿನ್ನ ಹರಕೆಯ ಫಲ
ನನ್ನ ಜ್ವರ ನಗಡಿಗಳಿಗೆಲ್ಲ ರಾಮಭಾಣ
ನಿನ್ನ ಕೈಯ ಗುಣ
ನನ್ನ ಬದುಕು ಬೆಳಕು ಕಂಡದ್ದು
ನಿನ್ನ ಹರಕೆ ಹಾರೈಕೆಗಳಿಂದ
ದೇವರ ಮುಡಿಗೆ ಅತಿ ಹೆಚ್ಚು ಹರಕೆ
ಸಂದಾಯವಾಗಿದ್ದೂ
ನಿನ್ನ ಪಾವನ ಕೈಗಳಿಂದ
ಶಾಲೆಯ ಮೆಟ್ಟಿಲು
ತುಳಿಯದವಳ
ಹ್ರದಯದರಮನೆಯಲ್ಲಿ
ಯಾವ ಕಾಲೇಜು ಯೂನಿವರ್ಸಿಟಿಗಳೂ
ಕಲಿಸಿ ಕೊಡದ ಪ್ರೀತಿ ಮಮತೆ ವಾತ್ಸಲ್ಯ
ಕಾಳಜಿಯ ಕಂಡು ಈ ಮಗ ಬೆರಗಾಗಿದ್ದಾನೆ
ಅಪ್ಪನಿಲ್ಲದ ಶೂಣ್ಯ ಆವರಿಸಿದಾಗಲೆಲ್ಲ
ಅಲ್ಲಿ ಅಮ್ಮನನ್ನೇ ತುಂಬಿ ಹಗುರಾಗಿದ್ದಾನೆ
ಕೆಲಸಕ್ಕೆಂದು ನಿನ್ನ ಬಿಟ್ಟು ಊರ ಬಿಟ್ಟು
ಊರಲ್ಲದ ಊರಿಗೆ
ನಿನ್ನ ಮಾತು ಮೀರಿ ಬಂದ
ಮೇಲೆ ತಿಳಿಯತೊಡಗಿದೆ
ನೀನಿಲ್ಲದ ನನ್ನ ಬಾಳ ಕಥೆ
ಅದು ಕಥೆಯಲ್ಲ
ಬರಿಯ ವ್ಯಥೆ!!
ನಿನ್ನ ನೆರಿಗೆ ಸೀರೆಯ
ಕಮಟು ವಾಸನೆಯಲ್ಲಿ
ನಿದಿರೆಯ ಜೊಂಪಿಗೆ ಹತ್ತುತ್ತಿದ್ದವಗೆ
ಇಲ್ಲಿನ ರೂಂ ಸ್ಪ್ರೇಯ ಘಮ ಘಮಕ್ಕೆ
ನಿದ್ರೆ ಹತ್ತದೆ ಇರುಳು ಬತ್ತುತಿದೆ!
ನನ್ನಿಷ್ಟದ ನಿನ್ನ ಕೈಯ
ನೀರು ದೋಸೆ ಬಸಳೆ ಸೊಪ್ಪು ಸಾರು ಎದರು
ಇಲ್ಲಿನ ಪಿಜ್ಜಾ ಬರ್ಗರ್ ತಿಂದು ತಿಂದು
ನಾಲಿಗೆ ಸತ್ತು ಬಿಟ್ಟಿದೆ
ಅಮ್ಮಾ ಮಮತೆ ವಾತ್ಸಲ್ಯದ ಪಂದ್ಯದಲ್ಲಿ ದಿನಾ
ನನ್ನ ಸೋಲಿಸುತ್ತೀಯ ಒಮ್ಮೆಯಾದರೂ
ನಿನ್ನಷ್ಟೆ ಮಮತೆ ವಾತ್ಸಲ್ಯ ನಾನು
ತೋರಿಸಬೇಕು ನಿನ್ನ ಮೇಲೆ ಒಮ್ಮೆ
ಸೋತವಳಂತೆ ನಟಿಸು ನಾ ಗೆಲ್ಲಬೇಕು.
ಅಬ್ದುಲ್ ಜಬ್ಬಾರ್ ಪರಪ್ಪು

ಹಸಿವು


ಆ ಸಿರಿವ೦ತ ತನ್ನ ಮಗನಿಗೆ
ಹಸಿವರಿಯದ೦ತೆ
ಅದೂ ಇದೂ ಅ೦ತ ತಿನ್ನಿಸುತ್ತಿದ್ದ.
ಹಾಗೊ೦ದು ದಿನ ತಿ೦ದದ್ದು ಕರಗಿಸಲು
ಮಗನ ಕೈ ಹಿಡಿದು ರಸ್ತೆಗಿಳಿದ
ಅಲ್ಲೊ೦ದು ಅನಾಥ ಬಾಲೆ
ಅಮ್ಮಾ ಹಸಿವು ಅಯ್ಯಾ ಹಸಿವು ಅ೦ತ
ಬೇಡುತಿತ್ತು
ಅದನ್ನು ಕ೦ಡ ಆ ಸಿರಿವ೦ತನ
ಪುಟ್ಟ ಪೋರ "ಅಪ್ಪಾ ಹಸಿವ೦ತೆ
ಹಾಗ೦ದರೇನು ಅ೦ದ
ತನ್ನ ಮಗನ ತೊದಲು ಮಾತು ಕೇಳಿದ
ಅಪ್ಪ
ಆ ಕ್ಷಣ ಮೌನವಾದ..

ಎ .ಜೆ ಪರಪ್ಪು


































































































ನನ್ನದೊಂದು ಹಳೆಯ ಚಿಕ್ಕ ಲೇಖನ.


ನನ್ನ ಸಾಹಿತ್ಯ ವಿರುವ ಒಂದು ಕನ್ನಡ ಹಾಡುಗಳ ಅಲ್ಬಮ್.





ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ನನ್ನ ಕವನ







































































































































































ಪೂರ್ವಗ್ರಹ ಪೀಡಿತ 



ಆತ ಕೇಳಿದ:-
ಪೂರ್ವಗ್ರಹ ಪೀಡಿತ ಅಂದರೇನು?
ನಾನಂದೆ:-
ಅಂಗವಿಕಲರ ಸ್ಕೂಟರನ್ನು
ಸರ್ವಾಂಗ ಸರಿ ಇರುವವ
ಚಲಾಯಿಸಿದರೂ
ಜನ ಯಾವ ಅಂಗ
ಊನವಾಗಿದೆ ಅಂತ ಹದ್ದಿನ
ಕಣ್ಣಿಟ್ಟು ದಿಟ್ಟಿಸುತ್ತಾರಲ್ಲ ಅದೇ.



ಎ.ಜೆ ಪರಪ್ಪು

ಮಹಿಳಾ ದಿನಾಚರಣೆ


ಮಹಿಳಾ ದಿನಾಚರಣೆಗೆ ಕವಿತೆ 
ಬರೆಯಲು ಹೊರಟಾಗ
ಸ್ತ್ರೀಗೆ ಸಮಾನಾರ್ಥಕ ಪದಗಳಿಗಾಗಿ 
ತಡಕಾಡಿ ಒಲಿಯದೆ ಹೋದಾಗ
ಅವಳ ಬಳಿ ಕೇಳಿದೆ
" ದೌರ್ಜನ್ಯಕ್ಕೊಳಗಾಗುವವರು"
ಅಂದ ಅವಳು ಅಡುಗೆ ಮನೆ ಸೇರಿ
ತನ್ನ ಕೆಲಸದಲ್ಲಿ ತಾನು ನಿರತಳಾದಳು
ನನಗರಿವಿಲ್ಲದೆ ಗಲ್ಲದ ಮೇಲಿಂದ
ಹನಿಯೊಂದು ಬಿದ್ದು ಆತ್ಮಹತ್ಯೆಗೆ
ಶರಣಾಯಿತು!


                                   ಎ.ಜೆ ಪರಪ್ಪು