ಸಾವು ದಿನಾ ಕಾಡುತಿದೆ
ಬೆಂಬಿಡದ ಬೇತಾಳದಂತೆ
ಜೀವನವನ್ನು ತಕ್ಕಡಿಯಲ್ಲಿ
ತೂಗಿ-ಅಳೆದು ನೋಡಿದರೆ
ಸಾವು ಸನ್ನಿಹಿತಲ್ಲಿದಂತೆ
ನಿನ್ನೆ ಒಂದು ಸಪ್ನ ಕಂಡೆ
ನಾನು ಅಸುನೀಗಿದ್ದೆ ಕಪನ
ಧರಿಸಿ ದಫನ ಮಾಡಲು
ತಯಾರಾದ ಮೃತ ದೇಹದಂತೆ
ಆರಡಿ ಮಣ್ಣು ಸೇರಲು ಕೆಲವು
ನಿಮಿಷ ಬಾಕಿ ಉಳಿದಂತೆ
ಕ್ರಿಮಿ-ಕೀಟ ವಿಷ ಜಂತುಗಳು
ಪೈಪೋಟಿ ಬಿದ್ದವರಂತೆ
ಬಾಯಲ್ಲಿ ಜೊಲ್ಲು ಸುರಿಸಿ
ಹೊಂಚು ಹಾಕುವ ನರಿಗಳಂತೆ
ಇಡಿ ಜಗತ್ತನೆ ಗೆದ್ದು ತನ್ನ
ಕಿರು ಬೆರಳಲ್ಲಿ ಆಡಿಸುತ್ತೇನೆ
ಎಂಬ “ಅಹಂ”ಅಲೆಕ್ಸಾಂಡರನಂತೆ
ಇಂದು ಅದೇ ಕಿರು ಬೆರಳು
ಅಲುಗಾಡಿಸಲು ಆಗದಷ್ಟು
ಜಂಘ ಬಲವೇ ಉಡುಗಿಹೋಗಿ
ಸ್ಥಬ್ದವಾಗಿ ಮಲಗಿದ್ದೇನೆ ಬೊಂಬೆಯಂತೆ
ಸಾವೆಂಬ ಮಾಯೆಯೇ
ಏನಿದು ನಿನ್ನ ಆಟ..
ಸತ್ತ ಮೇಲೆ ಬುದ್ಧಿ ಬರುತ್ತೆ
ಅನ್ನುತ್ತಾರಲ್ಲ ಇದೇ ನಿನ್ನ ಪಾಠವೇ
ಅಬ್ದುಲ್ ಜಬ್ಬಾರ್ ಪರಪ್ಪು, ಇರಾ.
ಇದನ್ನು ವಿ ಕೆ ನ್ಯೂಸ್ ನಲ್ಲಿ ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ http://www.vknews.in/2013/11/06/saavemba-maayave/

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ